BEST VIEW IN MOBILE

JOIN OUR WHATSAPP GROUP

JOIN OUR WHATSAPP GROUP
ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸ್ ಅಪ್ ಗ್ರೂಪಿಗೆ ನಿಮ್ಮ ಹೆಸರನ್ನು ನೋಂದಾಯಿಸಿ

SARKARI YOJANA UPDATES

ಪ್ರಧಾನ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆ-ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ಪಡೆಯುತ್ತಾನೆ.

ಭಾರತ ಕೃಷಿ ಪ್ರಧಾನ ದೇಶ. ರೈತನೇ ಆಧಾರ. ಹೀಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆ ಮೂಲಕ ರೈತರಿಗೆ ನಿವೃತ್ತಿ ವೇತನ ನೀಡುತ್ತಿದೆ. ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ವೇತನ ಪಡೆಯುತ್ತಾನೆ. ಅಂದರೆ ವಾರ್ಷಿಕ 36,000 ರೂಪಾಯಿ ರೈತನಿ ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆ ಮೂಲಕ ರೈತರು ನಿವೃತ್ತಿ ವೇತನ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ವಿವರ
 ಇಲ್ಲಿದೆ.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ PM ಕಿಸಾನ್ ಮನ್‌ಧನ್ ಯೋಜನೆ ಜಾರಿಗೆ ತಂದಿದ್ದಾರೆ
ವಾರ್ಷಿಕ 660 ರೂಪಾಯಿ ಪಾವತಿಸಿದರೆ ನಿವೃತ್ತಿ ವೇತನವಾಗಿ ಪ್ರತಿ ತಿಂಗಳು 3000 ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ





ಇಳಿ ವಯಸ್ಸಿನ ರೈತರು ಹಾಗೂ ಕಡಿಮೆ ಪ್ರದೇಶದಲ್ಲಿ ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಅನೂಕೂಲ
ಈ ಯೋಜನೆಯ ಅಡಿ 18 ರಿಂದ 40 ವಯಸ್ಸಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು
60 ವಯಸ್ಸು ದಾಟಿದ ರೈತರಿಗೆ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ಸಿಗಲಿದೆ
ರೈತ ಸಾವನ್ನಪ್ಪಿದರೆ  ಆತನ ಪತ್ನಿಗೆ ಶೇಕಡಾ 50 ರಷ್ಟು ಅಂದರೆ ಪ್ರತಿ ತಿಂಗಳು 1,500 ರೂಪಾಯಿ ವೇತನ ಸಿಗಲಿದೆ. ಕುಟುಂಬದಲ್ಲಿ ಕೇವಲ ಪತ್ನಿ ಮಾತ್ರ  ಶೇಕಡಾ 50 ರಷ್ಟು ನಿವೃತ್ತಿ ವೇತನ ಪಡೆಯಲು ಅರ್ಹರು
ಈ ಯೋಜನೆ ಲಾಭ ಪಡೆಯಲು ಯಾವುದೇ ನೋಂದಾವಣಿ  ಶುಲ್ಕವಿಲ್ಲ, ಇಷ್ಟೇ ಅಲ್ಲ ದಾಖಲೆ  ಸಲ್ಲಿಸಿದ ಹಲವು ರೈತರಿಗೂ ಕೇಂದ್ರ ಸರ್ಕಾರ ವೇತನ ನೀಡುತ್ತಿದೆ
ಸರ್ಕಾರದ ಅಧೀಕೃತ pension yojana ತಾಣದಲ್ಲಿನ  PM-KMYನಲ್ಲಿ ಹೆಸರು ನೋಂದಾಯಿಸಿ ದಾಖಲೆ ಸಲ್ಲಿಸುವ ಅವಕಾಶವಿದೆ
ಹತ್ತಿರದ ಸರ್ಕಾರಿ ಸೇವಾ ಕಚೇರಿಗೆ ಭೇಟಿ ನೀಡಿ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು
ರೈತನ ಆಧಾರ್ ಕಾರ್ಡ್ ನಂಬರ್ ಹಾಗೂ ಬ್ಯಾಂಕ್ ಖಾತೆ ವಿವರ ಕಡ್ಡಾಯವಾಗಿ ನೀಡಬೇಕು

ತ್ರಿವಳಿ ಪಿಂಚಣಿಗೆ ಚಾಲನೆ: 60 ವರ್ಷದ ಬಳಿಕ ಮಾಸಿಕ 3000 ರೂ, ರೈತರು, ವರ್ತಕರು, ಸ್ವಉದ್ಯೋಗಿಗಳು ನಿರಾಳ

ಪ್ರಧಾನ್ ಮಂತ್ರಿ ಕಿಸಾನ್ ಮನ್‌ ಧನ್‌ ಯೋಜನೆಯಡಿ 60 ವರ್ಷ ದಾಟಿದವರಿಗೆ ತಿಂಗಳಿಗೆ ಕನಿಷ್ಠ 3,000 ರೂ.ಗಳ ಪಿಂಚಣಿ ನೀಡುವ ಮೂಲಕ 5 ಕೋಟಿ ಸಣ್ಣ ಮತ್ತು ಅಲ್ಪ ರೈತರ ಜೀವನವನ್ನು ಭದ್ರಪಡಿಸುತ್ತದೆ.

ಯಾರಿಗೆ ಯಾವ ಯೋಜನೆ?
ಸಣ್ಣ ಮತ್ತು ಮಧ್ಯಮ ರೈತರಿಗೆ ಪಿಎಂ-ಕಿಸಾನ್‌ ಮಾನಧನ್‌

ಸಣ್ಣ ವರ್ತಕರಿಗೆ ಪಿಎಂ ಲಘು ವ್ಯಾಪಾರಿ ಮಾನಧನ್‌ ಯೋಜನೆ

ಸ್ವಂತ ಉದ್ಯೋಗಿಗಳಿಗೆ ಸ್ವರೋಜ್‌ಗಾರ್‌ ಪಿಂಚಣಿ ಯೋಜನೆ

ಯಾರಿಗೆ ಈ ಪಿಂಚಣಿ ಪ್ಲ್ಯಾನ್‌?
2 ಹೆಕ್ಟೇರ್‌ ತನಕ ಭೂಮಿ ಹೊಂದಿರುವ ರೈತರು

ಸಣ್ಣ ಪುಟ್ಟ ವರ್ತಕರು ಚಿಲ್ಲರೆ ಮಾರಾಟಗಾರರು

ಅಸಂಘಟಿತ ವಲಯದ ಬೀದಿ ವ್ಯಾಪಾರಿಗಳು, ಕೂಲಿಗಳು, ಚಿಂದಿ ಆಯುವವರು, ಮನೆ ಕೆಲಸದವರು, ಬೀಡಿ ಕಾರ್ಮಿಕರು, ಚರ್ಮñದ ಉತ್ಪನ್ನತಯಾರಕರು, ನಿರ್ಮಾಣ ಕಾರ್ಮಿಕರು, ಕೈಮಗ್ಗ ನೇಕಾರರು.








ಯಾರು ಅರ್ಹರು?

18ರಿಂದ 40 ವರ್ಷದೊಳಗಿನವರು

ಮಾಸಿಕ 15,000 ರೂ.ಗಿಂತ ಕಡಿಮೆ ಆದಾಯ ಇರುವವರು.

ಕನಿಷ್ಠ ವಿದ್ಯಾರ್ಹತೆಯ ಹಂಗು ಇಲ್ಲ
ಎನ್‌ಪಿಎಸ್‌, ಇಎಸ್‌ಐಸಿ, ಇಪಿಎಫ್‌ ಸೌಲಭ್ಯ ಇರುವವರು,

ಆದಾಯ ತೆರಿಗೆ ಪಾವತಿದಾರರು

ಯಾರು ಅನರ್ಹರು?
ಎನ್‌ಪಿಎಸ್‌, ಇಎಸ್‌ಐಸಿ, ಇಪಿಎಫ್‌ ಸೌಲಭ್ಯ ಇರುವವರು,

ಆದಾಯ ತೆರಿಗೆ ಪಾವತಿದಾರರು

ತಿಂಗಳಿಗೆ ಎಷ್ಟು ಕಟ್ಟಬೇಕು?

- ವಯಸ್ಸನ್ನು ಆಧರಿಸಿ ತಿಂಗಳಿಗೆ 55ರಿಂದ 200 ರೂ. ಕಟ್ಟಬೇಕು

- 18 ವರ್ಷದವರು 55 ರೂ., 40 ವರ್ಷದವರು 200 ರೂ.

- 60 ವರ್ಷದ ತನಕ ದೇಣಿಗೆ ನೀಡಿದರೆ ತಿಂಗಳಿಗೆ 3000 ರೂ. ಸಿಗುತ್ತದೆ.

- ನೀವು ನೀಡುವ ಮೊತ್ತಕ್ಕೆ ಸಮಾನ ಮೊತ್ತವನ್ನು ಸರಕಾರ ಸೇರಿಸುತ್ತದೆ.
- ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿ ಹಣ ಪಾವತಿಸಬಹುದು. ಹೆಚ್ಚುವರಿ ವೆಚ್ಚವಿಲ್ಲ

ಸಲ್ಲಿಸಬೇಕಾದ ದಾಖಲೆ
ಆಧಾರ್‌, ಬ್ಯಾಂಕ್‌ ಉಳಿತಾಯ ಖಾತೆ, ಆಟೊ ಡಿಬಿಟ್‌ ಫೆಸಿಲಿಟಿಗೆ ಒಪ್ಪಿಗೆ. ವಯಸ್ಸು ಅಥವಾ ಆದಾಯಕ್ಕೆ ಸ್ವ ಘೋಷಣೆ ಮಾತ್ರ ಸಾಕು.(ಆದರೆ ತಪ್ಪು ಮಾಹಿತಿ ನೀಡಿದರೆ ದಂಡ ವಿಧಿಸಬಹುದು)
- ಪಿಂಚಣಿದಾರ ಮೃತಪಟ್ಟರೆ ಸಂಗಾತಿಗೆ ಪಿಂಚಣಿಯ ಶೇ.50 ಪಾಲು ಸಿಗುತ್ತದೆ.

- ಪಿಂಚಣಿ ಸಿಗುವ ಮೊದಲೇ ಮೃತಪಟ್ಟರೆ ಸಂಗಾತಿ ಮುಂದುವರಿಸಿ ಪೂರ್ಣ ಪಿಂಚಣಿ ಪಡೆಯಬಹುದು.

- ಒಂದು ವೇಳೆ ಸಂಗಾತಿ ಬಯಸಿದರೆ ಅದುವರೆಗಿನ ಹೂಡಿಕೆಯನ್ನು ಬಡ್ಡಿ ಸಮೇತ ಪಡೆಯಬಹುದು.

ಅಸಂಘಟಿತ ವಲಯದ ಕಾರ್ಮಿಕ ಯೋಜನೆಗೆ ಸೇರಿದ ನಂತರ ಇಪಿಎಫ್‌ ಸೌಲಭ್ಯ ಇರುವ ಕೆಲಸಕ್ಕೆ ಸೇರಿದರೆ ಈ ಯೋಜನೆ ರದ್ದಾಗುತ್ತದೆಯೇ?:









ಅಸಂಘಟಿತ ವಲಯದ ಕಾರ್ಮಿಕನೊಬ್ಬ ಸಂಘಟಿತ ವಲಯಕ್ಕೆ ಸೇರಿದರೆ, ಇಪಿಎಫ್‌ಒ ಅಡಿಯಲ್ಲಿನೋಂದಣಿಯಾದರೆ ಈ ಪಿಂಚಣಿ ಯೋಜನೆ ರದ್ದಾಗುವುದಿಲ್ಲ. ಆದರೆ ಸರಕಾರದ ದೇಣಿಗೆ ಸ್ಥಗಿತವಾಗುತ್ತದೆ. ಸರಕಾರದ ಪಾಲನ್ನು ಅವರೇ ಕೊಡಬೇಕು. ಅಥವಾ ಹೂಡಿಕೆಯನ್ನು ಬಡ್ಡಿ ಸಹಿತ ಹಿಂತೆಗೆದುಕೊಳ್ಳಬಹುದು.

Comments

SUBCRIBE OUR YOUTUBE

SUBCRIBE OUR YOUTUBE
ತಪ್ಪದೆ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Popular Posts

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್-ಧನ್

ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ

ರೇಷನ್ ಕಾರ್ಡ್ ಬಗ್ಗೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಮತ್ತು ಮಾಹಿತಿ ಪಡೆಯಿರಿ

GOOGLE MAP