ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ-ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ಪಡೆಯುತ್ತಾನೆ.
Get link
Facebook
X
Pinterest
Email
Other Apps
-
ಭಾರತ ಕೃಷಿ ಪ್ರಧಾನ ದೇಶ. ರೈತನೇ ಆಧಾರ. ಹೀಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ ಮೂಲಕ ರೈತರಿಗೆ ನಿವೃತ್ತಿ ವೇತನ ನೀಡುತ್ತಿದೆ. ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ವೇತನ ಪಡೆಯುತ್ತಾನೆ. ಅಂದರೆ ವಾರ್ಷಿಕ 36,000 ರೂಪಾಯಿ ರೈತನಿ ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆ ಮೂಲಕ ರೈತರು ನಿವೃತ್ತಿ ವೇತನ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ವಿವರ
ಇಲ್ಲಿದೆ.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ PM ಕಿಸಾನ್ ಮನ್ಧನ್ ಯೋಜನೆ ಜಾರಿಗೆ ತಂದಿದ್ದಾರೆ
ವಾರ್ಷಿಕ 660 ರೂಪಾಯಿ ಪಾವತಿಸಿದರೆ ನಿವೃತ್ತಿ ವೇತನವಾಗಿ ಪ್ರತಿ ತಿಂಗಳು 3000 ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ
ಇಳಿ ವಯಸ್ಸಿನ ರೈತರು ಹಾಗೂ ಕಡಿಮೆ ಪ್ರದೇಶದಲ್ಲಿ ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಅನೂಕೂಲ
ಈ ಯೋಜನೆಯ ಅಡಿ 18 ರಿಂದ 40 ವಯಸ್ಸಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು
60 ವಯಸ್ಸು ದಾಟಿದ ರೈತರಿಗೆ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ಸಿಗಲಿದೆ
ರೈತ ಸಾವನ್ನಪ್ಪಿದರೆ ಆತನ ಪತ್ನಿಗೆ ಶೇಕಡಾ 50 ರಷ್ಟು ಅಂದರೆ ಪ್ರತಿ ತಿಂಗಳು 1,500 ರೂಪಾಯಿ ವೇತನ ಸಿಗಲಿದೆ. ಕುಟುಂಬದಲ್ಲಿ ಕೇವಲ ಪತ್ನಿ ಮಾತ್ರ ಶೇಕಡಾ 50 ರಷ್ಟು ನಿವೃತ್ತಿ ವೇತನ ಪಡೆಯಲು ಅರ್ಹರು
ಈ ಯೋಜನೆ ಲಾಭ ಪಡೆಯಲು ಯಾವುದೇ ನೋಂದಾವಣಿ ಶುಲ್ಕವಿಲ್ಲ, ಇಷ್ಟೇ ಅಲ್ಲ ದಾಖಲೆ ಸಲ್ಲಿಸಿದ ಹಲವು ರೈತರಿಗೂ ಕೇಂದ್ರ ಸರ್ಕಾರ ವೇತನ ನೀಡುತ್ತಿದೆ
ಸರ್ಕಾರದ ಅಧೀಕೃತ pension yojana ತಾಣದಲ್ಲಿನ PM-KMYನಲ್ಲಿ ಹೆಸರು ನೋಂದಾಯಿಸಿ ದಾಖಲೆ ಸಲ್ಲಿಸುವ ಅವಕಾಶವಿದೆ
ಹತ್ತಿರದ ಸರ್ಕಾರಿ ಸೇವಾ ಕಚೇರಿಗೆ ಭೇಟಿ ನೀಡಿ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು
ರೈತನ ಆಧಾರ್ ಕಾರ್ಡ್ ನಂಬರ್ ಹಾಗೂ ಬ್ಯಾಂಕ್ ಖಾತೆ ವಿವರ ಕಡ್ಡಾಯವಾಗಿ ನೀಡಬೇಕು
ತ್ರಿವಳಿ ಪಿಂಚಣಿಗೆ ಚಾಲನೆ: 60 ವರ್ಷದ ಬಳಿಕ ಮಾಸಿಕ 3000 ರೂ, ರೈತರು, ವರ್ತಕರು, ಸ್ವಉದ್ಯೋಗಿಗಳು ನಿರಾಳ
ಪ್ರಧಾನ್ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿ 60 ವರ್ಷ ದಾಟಿದವರಿಗೆ ತಿಂಗಳಿಗೆ ಕನಿಷ್ಠ 3,000 ರೂ.ಗಳ ಪಿಂಚಣಿ ನೀಡುವ ಮೂಲಕ 5 ಕೋಟಿ ಸಣ್ಣ ಮತ್ತು ಅಲ್ಪ ರೈತರ ಜೀವನವನ್ನು ಭದ್ರಪಡಿಸುತ್ತದೆ.
ಯಾರಿಗೆ ಯಾವ ಯೋಜನೆ?
ಸಣ್ಣ ಮತ್ತು ಮಧ್ಯಮ ರೈತರಿಗೆ ಪಿಎಂ-ಕಿಸಾನ್ ಮಾನಧನ್
ಸಣ್ಣ ವರ್ತಕರಿಗೆ ಪಿಎಂ ಲಘು ವ್ಯಾಪಾರಿ ಮಾನಧನ್ ಯೋಜನೆ
ಸ್ವಂತ ಉದ್ಯೋಗಿಗಳಿಗೆ ಸ್ವರೋಜ್ಗಾರ್ ಪಿಂಚಣಿ ಯೋಜನೆ
ಯಾರಿಗೆ ಈ ಪಿಂಚಣಿ ಪ್ಲ್ಯಾನ್?
2 ಹೆಕ್ಟೇರ್ ತನಕ ಭೂಮಿ ಹೊಂದಿರುವ ರೈತರು
ಸಣ್ಣ ಪುಟ್ಟ ವರ್ತಕರು ಚಿಲ್ಲರೆ ಮಾರಾಟಗಾರರು
ಅಸಂಘಟಿತ ವಲಯದ ಬೀದಿ ವ್ಯಾಪಾರಿಗಳು, ಕೂಲಿಗಳು, ಚಿಂದಿ ಆಯುವವರು, ಮನೆ ಕೆಲಸದವರು, ಬೀಡಿ ಕಾರ್ಮಿಕರು, ಚರ್ಮñದ ಉತ್ಪನ್ನತಯಾರಕರು, ನಿರ್ಮಾಣ ಕಾರ್ಮಿಕರು, ಕೈಮಗ್ಗ ನೇಕಾರರು.
ಯಾರು ಅರ್ಹರು?
18ರಿಂದ 40 ವರ್ಷದೊಳಗಿನವರು
ಮಾಸಿಕ 15,000 ರೂ.ಗಿಂತ ಕಡಿಮೆ ಆದಾಯ ಇರುವವರು.
ಕನಿಷ್ಠ ವಿದ್ಯಾರ್ಹತೆಯ ಹಂಗು ಇಲ್ಲ
ಎನ್ಪಿಎಸ್, ಇಎಸ್ಐಸಿ, ಇಪಿಎಫ್ ಸೌಲಭ್ಯ ಇರುವವರು,
ಆದಾಯ ತೆರಿಗೆ ಪಾವತಿದಾರರು
ಯಾರು ಅನರ್ಹರು?
ಎನ್ಪಿಎಸ್, ಇಎಸ್ಐಸಿ, ಇಪಿಎಫ್ ಸೌಲಭ್ಯ ಇರುವವರು,
ಆದಾಯ ತೆರಿಗೆ ಪಾವತಿದಾರರು
ತಿಂಗಳಿಗೆ ಎಷ್ಟು ಕಟ್ಟಬೇಕು?
- ವಯಸ್ಸನ್ನು ಆಧರಿಸಿ ತಿಂಗಳಿಗೆ 55ರಿಂದ 200 ರೂ. ಕಟ್ಟಬೇಕು
- 18 ವರ್ಷದವರು 55 ರೂ., 40 ವರ್ಷದವರು 200 ರೂ.
- 60 ವರ್ಷದ ತನಕ ದೇಣಿಗೆ ನೀಡಿದರೆ ತಿಂಗಳಿಗೆ 3000 ರೂ. ಸಿಗುತ್ತದೆ.
- ನೀವು ನೀಡುವ ಮೊತ್ತಕ್ಕೆ ಸಮಾನ ಮೊತ್ತವನ್ನು ಸರಕಾರ ಸೇರಿಸುತ್ತದೆ.
- ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿ ಹಣ ಪಾವತಿಸಬಹುದು. ಹೆಚ್ಚುವರಿ ವೆಚ್ಚವಿಲ್ಲ
ಸಲ್ಲಿಸಬೇಕಾದ ದಾಖಲೆ ಆಧಾರ್, ಬ್ಯಾಂಕ್ ಉಳಿತಾಯ ಖಾತೆ, ಆಟೊ ಡಿಬಿಟ್ ಫೆಸಿಲಿಟಿಗೆ ಒಪ್ಪಿಗೆ. ವಯಸ್ಸು ಅಥವಾ ಆದಾಯಕ್ಕೆ ಸ್ವ ಘೋಷಣೆ ಮಾತ್ರ ಸಾಕು.(ಆದರೆ ತಪ್ಪು ಮಾಹಿತಿ ನೀಡಿದರೆ ದಂಡ ವಿಧಿಸಬಹುದು)
- ಪಿಂಚಣಿದಾರ ಮೃತಪಟ್ಟರೆ ಸಂಗಾತಿಗೆ ಪಿಂಚಣಿಯ ಶೇ.50 ಪಾಲು ಸಿಗುತ್ತದೆ.
- ಪಿಂಚಣಿ ಸಿಗುವ ಮೊದಲೇ ಮೃತಪಟ್ಟರೆ ಸಂಗಾತಿ ಮುಂದುವರಿಸಿ ಪೂರ್ಣ ಪಿಂಚಣಿ ಪಡೆಯಬಹುದು.
- ಒಂದು ವೇಳೆ ಸಂಗಾತಿ ಬಯಸಿದರೆ ಅದುವರೆಗಿನ ಹೂಡಿಕೆಯನ್ನು ಬಡ್ಡಿ ಸಮೇತ ಪಡೆಯಬಹುದು.
ಅಸಂಘಟಿತ ವಲಯದ ಕಾರ್ಮಿಕ ಯೋಜನೆಗೆ ಸೇರಿದ ನಂತರ ಇಪಿಎಫ್ ಸೌಲಭ್ಯ ಇರುವ ಕೆಲಸಕ್ಕೆ ಸೇರಿದರೆ ಈ ಯೋಜನೆ ರದ್ದಾಗುತ್ತದೆಯೇ?:
ಅಸಂಘಟಿತ ವಲಯದ ಕಾರ್ಮಿಕನೊಬ್ಬ ಸಂಘಟಿತ ವಲಯಕ್ಕೆ ಸೇರಿದರೆ, ಇಪಿಎಫ್ಒ ಅಡಿಯಲ್ಲಿನೋಂದಣಿಯಾದರೆ ಈ ಪಿಂಚಣಿ ಯೋಜನೆ ರದ್ದಾಗುವುದಿಲ್ಲ. ಆದರೆ ಸರಕಾರದ ದೇಣಿಗೆ ಸ್ಥಗಿತವಾಗುತ್ತದೆ. ಸರಕಾರದ ಪಾಲನ್ನು ಅವರೇ ಕೊಡಬೇಕು. ಅಥವಾ ಹೂಡಿಕೆಯನ್ನು ಬಡ್ಡಿ ಸಹಿತ ಹಿಂತೆಗೆದುಕೊಳ್ಳಬಹುದು.
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್-ಧನ್| ( PM-SYM) SCHEME ಅಸಂಘಟಿತ ವಲಯದ ಕಾರ್ಮಿಕರಿಗೆ ಪೆನ್ಷನ್ ಯೋಜನೆ ತಿಂಗಳಿಗೆ 3000/- ಕೂಲಿ ಕಾರ್ಮಿಕರು ಡ್ರೈವರ್ ಎಲೆಕ್ಟ್ರಿಷಿಯನ್ ಪ್ಲಂಬರ್ ಕಟ್ಟಡ ಕಾರ್ಮಿಕರು ಕೃಷಿ ಕಾರ್ಮಿಕರು ಟೈಲರಿಂಗ್ ಕಾರ್ಮಿಕರು ಬೀದಿ ವ್ಯಾಪಾರಿಗಳು ಬೀಡಿ ಕಾರ್ಮಿಕರು ಭೂ ರಹಿತ ಕಾರ್ಮಿಕರು ಮನೆ ಕೆಲಸ ಕಾರ್ಮಿಕರು ಹಾಗೂ ಇನ್ನಿತರ ವಲಯದ ಕಾರ್ಮಿಕರು ಈ ಯೋಜನೆಯನ್ನು ಪಡೆದುಕೊಳ್ಳಬಹುದು ವಿ. ಸೂ: ಈ ಯೋಜನೆ ಮಾಡಿಕೊಳ್ಳ ಬಯಸುವವರು ವಯಸ್ಸು 18 ರಿಂದ 40 ವರ್ಷದೊಳಗಿರಬೇಕು ಮತ್ತು ವಯಸ್ಸಿನ ಆಧಾರದ ಮೇಲೆ ತಿಂಗಳಿಗೆ Rs.55 ರಿಂದ 200 ರೂಪಾಯಿ ಬ್ಯಾಂಕಿನಿಂದ ಕಟ್ ಆಗುತ್ತದೆ ಅರವತ್ತು ವರ್ಷದ ನಂತರ ನಿಮಗೆ ಮೂರು ಸಾವಿರ ರೂಗಳು (3000/- ಪೆನ್ಷನ್ ಬರಲು ಪ್ರಾರಂಭವಾಗುತ್ತದೆ ಒಂದು ವೇಳೆ ನೀವು ಪಿಎಫ್ ತೆಗೆದುಕೊಳ್ಳುವುದಾದರೆ ಈ ಸೌಲಭ್ಯ ನಿಮಗಿರುವುದಿಲ್ಲ ಮತ್ತು ನಿಮ್ಮ ಮಾಸಿಕ ವೇತನ 15000/- ರೂ ಒಳಗಿರಬೇಕು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9916444424 ಪೆನ್ಷನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಈ ಲಿಂಕ್ ಕ್ಲಿಕ್ ಮಾಡಿ ಮತ್ತು ವಿಡಿಯೋ ನೋಡಿ 2019 ರಲ್ಲಿ ಪ್ರಾರಂಭವಾದ ಯೋಜನೆ ಚಾಲ್ತಿಯಲ್ಲಿರುತ್ತದೆ ಅನೇಕರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ ಆದಷ್ಟು ಶೇರ್ ಮಾಡಿ ಸರ್ಕಾರಿ ಯೋಜನೆಗಳ ಟೆಲಿಗ್ರಾಂ ಗ್ರೂಪ್ ಸರ್ಕಾರಿ ಯೋಜನೆಗಳು| 9916444424
ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೂ ಮನೆ ಎನ್ನುವುದು ಒಂದು ವಾಸಸ್ಥಳದ ರೂಪವಾಗಿ ಬೇಕೇ ಬೇಕು. ಅನುಕೂಲ ಇರುವವರು ತಮಗೆ ಬೇಕಾದಂತೆ ಹೊಸ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಹಾಗೆಯೇ ಅನುಕೂಲ ಇಲ್ಲದವರು ತಮ್ಮ ಕೈಯಲ್ಲಿ ಆದ ಮಟ್ಟಿಗೆ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಹಾಗೆಯೇ ಸಾಲಗಳನ್ನು ಮಾಡಿ ಹಲವಾರು ವರ್ಷಗಳ ನಂತರ ತೀರಿಸುತ್ತಾರೆ. ಆದ್ದರಿಂದ ಇಂತಹವರಿಗೆ ಸೌಲಭ್ಯ ಒದಗಿಸಲು ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಬೆಂಗಳೂರು ನಿವಾಸಿಗಳಿಗೆ ರಾಜ್ಯ ಸರ್ಕಾರ ಒಂದು ಸಿಹಿಸುದ್ದಿಯನ್ನು ನೀಡಿದೆ. ರಾಜ್ಯಸರ್ಕಾರ ಬೆಂಗಳೂರು ವಸತಿಯೋಜನೆಯನ್ನು ಆರಂಭಿಸಿದೆ. ಬೆಂಗಳೂರು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಮಾಡಬೇಕು ಎಂದು ಕನಸು ಇರುತ್ತದೆ. ಹಾಗಾಗಿ ಇದಕ್ಕೆ ಒಂದು ಸದಾವಕಾಶವನ್ನು ಬೆಂಗಳೂರಿನ ಜನರಿಗೆ ನೀಡಲಾಗುತ್ತಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಗೆ ಸ್ವಂತ ಮನೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಾಗೆಯೇ ಅರ್ಜಿ ಸಲ್ಲಿಸುವವರ ಆದಾಯ 3ಲಕ್ಷ ಹಣವನ್ನು ಮೀರಿರಬಾರದು. 5ವರ್ಷಗಳ ಕಾಲ ಬೆಂಗಳೂರು ನಗರ ಅಥವಾ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸ ಮಾಡಿರಬೇಕಾಗುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಎಲ್ಲಿಯೂ...
ಎಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಬೇಕಾದಲ್ಲಿ ನಮಗೆ ಆಧಾರ್ ಕಾರ್ಡ್ ವಾಟ್ಸಪ್ ಮಾಡಿದರೆ ಸಾಕು ಮತ್ತು ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿರಬೇಕು ಒಂದು ದಿನದಲ್ಲಿ ನಿಮಗೆ ಎಪಿಎಲ್ ಕಾರ್ಡ್ ಸಿಗುತ್ತದೆ ಬಿಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಬೇಕಾದಲ್ಲಿ ಕಡ್ಡಾಯವಾಗಿ ನಮ್ಮ ಕಚೇರಿಗೆ ಭೇಟಿ ನೀಡಬೇಕು ನಮ್ಮ ವಿಳಾಸ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು -560100 ಬೇಕಾಗಿರುವ ದಾಖಲೆಗಳು ಕುಟುಂಬ ಮುಖ್ಯಸ್ಥರ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪತ್ರ ಮತ್ತು ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ ಈ ದಾಖಲೆಗಳನ್ನು ತೆಗೆದುಕೊಂಡು ಕಚೇರಿಗೆ ಭೇಟಿ ನೀಡಬೇಕು . ಹೆಚ್ಚಿನ ಮಾಹಿತಿಗೆ ನಮಗೆ ವಾಟ್ಸಪ್ ಮಾಡಿ 9916444424 CLICK HERE
Comments
Post a Comment
ದಯವಿಟ್ಟು ನಿಮ್ಮ ಯಾವುದೇ ಮಾಹಿತಿಯನ್ನು ನಮಗೆ ವಾಟ್ಸಪ್ ಮಾಡಿ 9916444424