BEST VIEW IN MOBILE

JOIN OUR WHATSAPP GROUP

JOIN OUR WHATSAPP GROUP
ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸ್ ಅಪ್ ಗ್ರೂಪಿಗೆ ನಿಮ್ಮ ಹೆಸರನ್ನು ನೋಂದಾಯಿಸಿ

SARKARI YOJANA UPDATES

PAN-Aadhar ಲಿಂಕ್ ಗೆ ಕೊನೆ ದಿನ ನಿಗದಿಯಾಗಿದೆ: ಮಾಡಿಲ್ಲ ಅಂದ್ರೆ ಏನಾಗುತ್ತೆ ಗೊತ್ತೇ?

ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಮತ್ತೆ ಗಡುವು ವಿಸ್ತರಣೆ! ಜೂನ್‌ 30 ಕೊನೇ ದಿನ

ಆದಾಯ ತೆರಿಗೆ ಇಲಾಖೆಯು ಪ್ಯಾನ್‌ - ಆಧಾರ್‌ ಲಿಂಕ್‌ ಮಾಡಲು ಇದ್ದ ಮಾರ್ಚ್‌ 31ರ ಗಡುವನ್ನು 2021ರ ಜೂನ್‌ 30ಕ್ಕೆ ವಿಸ್ತರಿಸಿದೆ. ಕೊರೊನಾ ಸೋಂಕು ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಹೈಲೈಟ್ಸ್‌:

  • ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಗಡುವು ವಿಸ್ತರಿಸಿದ ಆದಾಯ ತೆರಿಗೆ ಇಲಾಖೆ
  • ಈ ಹಿಂದೆ ಮಾರ್ಚ್‌ 31ಕ್ಕೆ ಇದ್ದ ಗಡುವು ಜೂನ್ 30ಕ್ಕೆ ವಿಸ್ತರಣೆ
  • ಕೊರೊನಾ ಸೋಂಕು ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ
  • ಬೆಂಗಳೂರು: ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್ ಮಾಡಲು ಕೊನೇ ದಿನಾಂಕ ಮತ್ತೊಮ್ಮೆ ವಿಸ್ತರಣೆಯಾಗಿದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್‌ - ಆಧಾರ್‌ ಲಿಂಕ್‌ ಮಾಡಲು ಇದ್ದ ಮಾರ್ಚ್‌ 31ರ ಗಡುವನ್ನು 2021ರ ಜೂನ್‌ 30ಕ್ಕೆ ವಿಸ್ತರಿಸಿದೆ. ಕೊರೊನಾ ಸೋಂಕು ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
  • ಈ ಹಿಂದೆ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್ ಮಾಡಲು ಮಾರ್ಚ್‌ 31ನ್ನು ಕಡೇ ದಿನವಾಗಿ ನಿಗದಿಮಾಡಲಾಗಿತ್ತು. 2021ರ ಮಾರ್ಚ್ 31ರೊಳಗೆ ಲಿಂಕ್ ಮಾಡದಿದ್ದರೆ 1000 ರೂ. ದಂಡವನ್ನೂ ನಿಗದಿಮಾಡಲಾಗಿತ್ತು.
  • ಒಂದು ವೇಳೆ ನಿಗದಿತ ಅವಧಿಯೊಳಗೆ ನಿಮ್ಮ ಪ್ಯಾನ್‌ ಕಾರ್ಡ್‌ ಆಧಾರ್‌ನೊಂದಿಗೆ ಲಿಂಕ್‌ ಆಗದಿದ್ದರೆ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ. ಅಲ್ಲದೆ, ದಂಡವನ್ನೂ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್‌ 234 ಎಚ್‌ ಪ್ರಕಾರ ಇದು ಅನ್ವಯಿಸುತ್ತದೆ. 2021ರ ಮಾರ್ಚ್ 23ರಂದು ಹಣಕಾಸು ವಿಧೇಯಕದ ಅಂಗೀಕಾರ ವೇಳೆ ಈ ಅಂಶವನ್ನು ಸೇರಿಸಲಾಗಿತ್ತು.
  • ಆಧಾರ್‌ 12 ಅಂಕಿಗಳನ್ನು ಹೊಂದಿದ್ದು, ಯುನಿಕ್‌ ಐಡೆಂಟಿಫಿಕೇಷನ್‌ ಅಥಾರಿಟಿ ನೀಡಿತ್ತದೆ. ಪ್ಯಾನ್‌ನಲ್ಲಿ 10 ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳಿದ್ದು, ಇದನ್ನು ಆದಾತ ತೆರಿಗೆ ಇಲಾಖೆಯೇ ನಿಗದಿಮಾಡುತ್ತದೆ.
  • ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ನ್ನು ಲಿಂಕ್‌ ಮಾಡಲು ಈ ಹಿಂದೆ ಹಲವು ಬಾರಿ ಸರಕಾರ ಕೇಳಿಕೊಂಡಿತ್ತು. ಮತ್ತು ಲಿಂಕ್‌ ಮಾಡಲು ನೀಡಿದ ಗಡುವನ್ನು ಹಲವು ಬಾರಿ ವಿಸ್ತರಿಸಿತ್ತು. ಆದರೆ ಇದೀಗ ಲಿಂಕ್‌ ಮಾಡದೇ ಇರುವವರಿಗೆ ದಂಡ ವಿಧಿಸಲು ನಿರ್ಧರಿಸಿದೆ.
  • ಆದಾಯ ತೆರಿಗೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ಪ್ಯಾನ್ ನೀಡದಿದ್ದರೆ ಅಥವಾ ನಿಷ್ಕ್ರಿಯವಾದ ಪ್ಯಾನ್ ನೀಡಿದರೆ ಅವನು/ಅವಳು ಹೆಚ್ಚಿನ ಟಿಡಿಎಸ್ (ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ) ಅಥವಾ ಟಿಸಿಎಸ್ (ಮೂಲದಲ್ಲಿ ಸಂಗ್ರಹಿಸಿದ ತೆರಿಗೆ) ಪಾವತಿಸಬೇಕಾಗಬಹುದು. ಅಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಸಾಧ್ಯವಾಗುತ್ತದೆ ಮತ್ತು ತೆರಿಗೆ ರಿಟರ್ನ್ ಸಲ್ಲಿಸದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.


Comments

SUBCRIBE OUR YOUTUBE

SUBCRIBE OUR YOUTUBE
ತಪ್ಪದೆ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Popular Posts

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್-ಧನ್

ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ

ರೇಷನ್ ಕಾರ್ಡ್ ಬಗ್ಗೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಮತ್ತು ಮಾಹಿತಿ ಪಡೆಯಿರಿ

GOOGLE MAP