Posts

Showing posts from April, 2021

JOIN OUR WHATSAPP GROUP

JOIN OUR WHATSAPP GROUP
ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸ್ ಅಪ್ ಗ್ರೂಪಿಗೆ ನಿಮ್ಮ ಹೆಸರನ್ನು ನೋಂದಾಯಿಸಿ

SARKARI YOJANA UPDATES

ಸ್ವಯಂ ಉದ್ಯೋಗ ಯೋಜನೆ

Image
  ಉದ್ಯಮಶೀಲತಾ ಯೋಜನೆ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರು ಸಣ್ಣಕೈಗಾರಿಗೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು. ಈ ಯೋಜನೆಯಡಿ ಮೂರು ಹಂತದ ಘಟಕ ವೆಚ್ಚವನ್ನು ಆಧರಿಸಿ ಸಹಾಯಧನವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ. 1.  ಘಟಕ ವೆಚ್ಚ ರೂ. 5.00 ಲಕ್ಷಗಳವರೆಗೆ ಶೇ.70% ಅಥವಾ ಗರಿಷ್ಠ ರೂ. 3.50 ಲಕ್ಷ ಸಹಾಯಧನ 2.  ಘಟಕ ವೆಚ್ಚ ರೂ. 5.00 ಲಕ್ಷ ದಿಂದ ರೂ. 10.00 ಲಕ್ಷಗಳವರೆಗೆ ಶೇ.60% ಅಥವಾ ಗರಿಷ್ಠ ರೂ. 5.00 ಲಕ್ಷ ಸಹಾಯಧನ 3.  ಘಟಕ ವೆಚ್ಚ ರೂ. 10.00 ಲಕ್ಷ ದಿಂದ ರೂ. 20.00 ಲಕ್ಷಗಳವರೆಗೆ ಶೇ.50% ಅಥವಾ ಗರಿಷ್ಠ ರೂ. 5.00 ಲಕ್ಷ ಸಹಾಯಧನ ನಿಗಮದ ಸಹಾಧನವನ್ನು ಹೊರತುಪಡಿಸಿ ಘಟಕ ವೆಚ್ಚದ ಉಳಿದ ಭಾಗವನ್ನು ಬ್ಯಾಂಕ್ ಸಾಲದಿಂದ ಭರಿಸಲಾಗುವುದು. ಇ)  ಕೆಲವೊಂದು ಯೋಜನೆಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಹಾಗೂ ಅಭಿವೃದ್ದಿ ನಿಗಮದಿಂದ ಸಾಲ ಪಡೆದು ನೇರವಾಗಿ ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚದಲ್ಲಿ ಶೇ.5ರಷ್ಟು ಭಾಗ ಫಲಾನುಭವಿಯ ಪಾಲು, ಶೇ.20 ಭಾಗ ನಿಗಮದಿಂದ ಅಂಚಿನ ಹಣ(ಗರಿಷ್ಠ ರೂ.1.00ಲಕ್ಷ) ಹಾಗೂ ಉಳಿದ ಶೇ.75 ಭಾಗವನ್ನು ರಾಷ್ಟ್ರೀಯ ಹಣಕಾಸು ಅಭಿವೃದ್ದಿ ನಿಗಮದ ಹಣದಿಂದ ಸಾಲದ ರೂಪದಲ್ಲಿ ಭರಿಸಲ...

ಐರಾವತ ಯೋಜನೆ-ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಯೋಜನೆಗೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು

Image
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಯೋಜನೆಗೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಲಘು ವಾಹನ ಚಾಲನಾ ಪರವಾನಗಿ ಹೊಂದಿರುವ ಪರಿಶಿಷ್ಟ ಜಾತಿಯ ನಿರುದ್ಯೋಗಿ ವಿಧ್ಯಾವಂತ ಯುವಕ / ಯುವತಿಯರಿಗೆ ಪ್ರವಾಸಿ ಟ್ಯಾಕ್ಸಿಗಳ ಮಾಲೀಕರನ್ನಾಗಿ ಮಾಡಿ “ಓಲಾ” / “ಉಬರ್” / “ಮೇರು” ಸಂಸ್ಥೆಗಳ ಸಹಯೋಗದಲ್ಲಿ ಅತಿ ಹೆಚ್ಚು ಆದಾಯ ಪಡೆಯುವ “ಐರಾವತ ಯೋಜನೆ” ಅನುಷ್ಟಾನಗೊಳಿಸಲು ಉದ್ದೇಶಿಸಿದೆ. ಕರ್ನಾಟಕ ರಾಜ್ಯ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರ ತಾಣವಾಗಿದ್ದು, ಈ ಯೋಜನೆಗೆ ಹೆಚ್ಚನ ಬೇಡಿಕೆ ಇರುತ್ತದೆ. ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಯೋಜನೆಗೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು. ಉಳಿದ ಭಾಗ ಬ್ಯಾಂಕ್/ಹಣಕಾಸು ಸಂಸ್ಥೆ/ಫಲಾನುಭವಿಯ ವಂತಿಕೆಯಿಂದ ಭರಿಸಿ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳಿದೆ “ಓಲಾ”/”ಉಬರ್”/”ಮೇರು” ಸಂಸ್ಥೆಗಳೊಂದಿಗೆ ಟೈ-ಅಪ್ ಮಾಡಿಕೊಂಡು ಬೇಡಿಕೆ ಇರುವ ಮುಖ್ಯ ನಗರ ಪ್ರದೇಶಗಳಾದ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಇನ್ನಿತರೇ ಜಿಲ್ಲಾ ಕೇಂದ್ರಗಳಲ್ಲಿ ವಾಹನ ಚಾಲನೆ ಮಾಡಲು ವ್ಯವಸ್ಥೆ ಮಾಡಿ, ಯೋಜನೆಯನ್ನು ರೂಪಿಸಾಗಿದೆ.

ಸಮೃದ್ಧಿ ಯೋಜನೆ-ಆಯ್ಕೆಯಾದ ಪ್ರತೀ ಫಲಾನುಭವಿಗೆ ಗರಿಷ್ಠ ರೂ. 10.00 ಲಕ್ಷಗಳವರೆಗೆ ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ.

Image
ಆಯ್ಕೆಯಾದ ಪ್ರತೀ ಫಲಾನುಭವಿಗೆ ಗರಿಷ್ಠ ರೂ. 10.00 ಲಕ್ಷಗಳವರೆಗೆ ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ. ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಗ್ರಾಮೀಣ/ನಗರ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರನ್ನು ಉದ್ಯಮಶೀಲರನ್ನಾಗಿಸಲು “ಸಮೃದ್ಧಿ ಯೋಜನೆ” ಅನುಷ್ಟಾನಗೊಳಿಸಲು ಉದ್ದೇಶಿಸಿದೆ. ಸದರಿ ಯೋಜನೆಯಡಿ ಪರಿಶಿಷ್ಟ ಜಾತಿ ನಿರುದ್ಯೋಗಿಗಳಿಗೆ ವಿವಿಧ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಹಾಗೂ ಲಾಭದಾಯಕವಾಗಿ ನಡೆಸಲು ಅಗತ್ಯವಾದ ಉದ್ಯಮಶೀಲತಾ ತರಬೇತಿ/ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಘಟಕಗಳನ್ನು ಸೃಷ್ಟಿಸಲು ವ್ಯವಸ್ಥೆ ಮಾಡಲಾಗುವುದು. ಸದರಿ ಯೋಜನೆಯಡಿ ವಿವಿಧ ಉದ್ದೇಶಗಳಡಿ ಯೋಜನೆಗಳನ್ನು ರೂಪಿಸಲಾಗಿದೆ. ಉತ್ತಮ ಮಾರುಕಟ್ಟೆ ಹೊಂದಿರುವ ಸರ್ಕಾರಿ ಮತ್ತು ಖಾಸಗಿ ಬ್ರಾಂಡೆಡ್ ಸಂಸ್ಥೆಗಳ ಸಹಯೋಗದಲ್ಲಿ ಫ್ರಾಂಚೈಸಿ/ಡೀಲರ್ ಶಿಪ್ ವ್ಯವಸ್ಥೆಯೊಂದಿಗೆ ರಿಟೈಲ್ ವ್ಯಾಪಾರಿ ಮಳಿಗೆಗಳನ್ನು ಆರಂಭಿಸಲು ಅಗತ್ಯವಾದ ತಾಂತ್ರಿಕ ಬೆಂಬಲ ಹಾಗೂ ಆರ್ಥಿಕ ಬೆಂಬಲ ನೀಡಿ ಯಶ್ವಸಿ ಉದ್ದಿಮೆದಾರರನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಈಗಾಗಲೇ ಸರ್ಕಾರಿ ಮತ್ತು ಬ್ರಾಂಡೆಡ್ ಸಂಸ್ಥೆಗಳ ಜೊತೆ ಸರ್ಕಾರವು ಒಡಂಬಡಿಕೆ(ಎಂಓಯು) ಮಾಡಿಕೊಳ್ಳಲು ವ್ಯವಸ್ಥೆಯಾಗಿರುತ್ತದೆ. ಆಯ್ಕೆಯಾದ ಪ್ರತೀ ಫಲಾನುಭವಿಗೆ ಗರಿಷ್ಠ ರೂ. 10.00 ಲಕ್ಷಗಳವರೆಗೆ ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ.  

ಉದ್ಯೋಗಿನಿ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

Image
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ, ಸರ್ಕಾರದ ಉದ್ಯೋಗಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಆದಾಯ ಉತ್ಪನ್ನಕರ ಚುಟವಟಿಕೆಗಳಲ್ಲಿ ತೊಗಿಸಿಕೊಂಡು.. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ, ಸರ್ಕಾರದ ಉದ್ಯೋಗಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಆದಾಯ ಉತ್ಪನ್ನಕರ ಚುಟವಟಿಕೆಗಳಲ್ಲಿ ತೊಗಿಸಿಕೊಂಡು, ಸ್ವಯಂ ಉದ್ಯೋಗಿಗಳಾಗದಲು ಬ್ಯಾಂಕ್ ಮುಖಾಂತರ ಸಾಲ ಮತ್ತು ನಿಗಮದಿಂದ ಸಹಾಯಧನ ನೀಡಲು ಅರ್ಹ ಮಹಿಳೆಯರಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ಘಟಕ ವೆಚ್ಚ ರೂ. 1 ಲಕ್ಷ ಮೇಲ್ಪಟ್ಟು ರೂ.5 ಲಕ್ಷದವರೆಗೆ, ಘಟಕ ವೆಚ್ಚದ ಹಾಗೂ ಸಹಾಯಧನ ಘಟಕ ವೆಚ್ಚ ಶೇ.70 ಅಥವಾ ಗರಿಷ್ಠ ರೂ.3.50 ಲಕ್ಷ ಬದಲಾಗಿ ಘಟಕ ವೆಚ್ಚ ರೂ. 1 ಲಕ್ಷ ಮೇಲ್ಪಟ್ಟು ರೂ. 3 ಲಕ್ಷದವರೆಗೆ ಇರುವ ಯೋಜನೆಗಳಲ್ಲಿ ನಿಗಮದಿಂದ ಸಹಾಯಧನವನ್ನು ಘಟಕ ವೆಚ್ಚ ಶೇ.50 ರಷ್ಟು ಅಥವಾ ಗರಿಷ್ಠ ರೂ.1.50 ಲಕ್ಷ ಸಹಾಯಧನ ನೀಡಿ ಉಳಿದ ವೆಚ್ಚವನ್ನು ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಾಜಿದೇವದಾಸಿಯರು ಹಾಗೂ ಅವರ ಹೆಣ್ಣು ಮಕ್ಕಳಿಗೆ, ದಮನಿತ ಮಹಿಳೆಯರು ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ನಡೆಯುತ್ತದೆ. ಸ್ವ ಉದ್ಯೋಗ ಮಾಡುವವರು ಈ ದಾಖಲಾತಿಯನ್ನು ತಪ್ಪದ...

ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರಿಸುವುದು ಈಗ ಮತ್ತಷ್ಟು ಸುಲಭ! ಹೇಗೆ ಗೊತ್ತಾ?

Image
ನವದೆಹಲಿ. ಪಡಿತರ ಚೀಟಿ ಮೂಲಕ ಸರ್ಕಾರ ತಮ್ಮ ಬಡವರಿಗೆ ಪಡಿತರ ವನ್ನು ಒದಗಿಸುತ್ತದೆ. ಪಡಿತರ ಚೀಟಿಗಳನ್ನು ಅನೇಕ ಸ್ಥಳಗಳಲ್ಲಿ ಐಡಿ ಪುರಾವೆಯಾಗಿ ಬಳಸಲಾಗುತ್ತದೆ. ಎಲ್ ಪಿಜಿ ಸಂಪರ್ಕಗಳಲ್ಲಿ  ಚಾಲನಾ ಪರವಾನಗಿಗಳು  ಇತ್ಯಾದಿಗಳಲ್ಲಿ   ರೇಷನ್   ಕಾರ್ಡ್  ವಿಳಾಸ   ಪುರಾವೆಯಾಗಿಯೂ ಪ್ರಮಾಣೀಕರಿಸಲಾಗುತ್ತದೆ.  ಪಡಿತರ ಕಾರ್ಡ್ ಅನ್ನು ಒಂದು ನಿರ್ದಿಷ್ಟ ಆದಾಯ ಗುಂಪಿಗೆ ನೀಡಲಾಗುತ್ತದೆ. ಇದು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಮಿತಿಗಳನ್ನು ಹೊಂದಿದೆ. ಕುಟುಂಬದಲ್ಲಿ ಮಗು ಅಥವಾ ಹೊಸ ಸೊಸೆಯಂತಹ ಹೊಸ ಸದಸ್ಯರು ನಿಮ್ಮ ಮನೆಗೆ ಸೇರಿಕೊಂಡಿದ್ದರೆ, ನೀವು ಅವರ ಹೆಸರನ್ನು ಪಡಿತರ ಕಾರ್ಡ್ ಗೆ ಸೇರಿಸಬಹುದು ಆದ್ದರಿಂದ ನೀವು ಈ ಸುಲಭ ಪ್ರಕ್ರಿಯೆಯನ್ನು ಅನುಸರಿಸಬೇಕು. ಪಡಿತರ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರುವುಸುವುದು ಹೇಗೆ? ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರನ್ನು ಸೇರಿಸಲು ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಮಾರ್ಪಡಿಸಬೇಕು. ಉದಾಹರಣೆಗೆ, ಮದುವೆಯ ನಂತರ ಹುಡುಗಿ ತನ್ನ ಉಪನಾಮವನ್ನು ಬದಲಾಯಿಸಿದರೆ, ಅವಳು ತನ್ನ ತಂದೆಯ ಬದಲಿಗೆ ತನ್ನ ಗಂಡನ ಹೆಸರಿನೊಂದಿಗೆ ತನ್ನ ಆಧಾರ್ ಕಾರ್ಡ್ ಅನ್ನು ಭರ್ತಿ ಮಾಡಬೇಕು ಮತ್ತು ಹೊಸ ವಿಳಾಸವನ್ನು ನವೀಕರಿಸಬೇಕಾಗುತ್ತದೆ. ನಂತರ ಹೊಸ ಆಧಾರ್ ಕಾರ್ಡ್ ನ ವಿವರಗಳನ್ನು ಗಂಡನ ಪ್ರದೇಶದ ಆಹಾರ ಇಲಾಖೆ ಅಧಿಕಾರಿಗೆ ನೀಡಬೇಕಾಗುತ್ತದೆ. ಆನ್ ಲೈನ್ ಪರಿಶೀಲನೆ...

ಪಿಎಂ ಕಿಸಾನ್: ರೈತರ ಖಾತೆಗೆ 2000 ಜಮಾ! ನಿಮಗೂ ಬರುತ್ತೋ ಇಲ್ಲವೋ ಇಲ್ಲಿ ಪರಿಶೀಲಿಸಿ!

Image
  ನವದೆಹಲಿ:  ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಪಿಎಂ ರೈತ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ, ನಿಮಗೆ ಈ ಯೋಜನೆಯ 2021 ಮೊದಲ ಕಂತು 2000 ರೂ. ಸಹ ಸಿಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ರೈತರಿಗೆ ಈ ಕಂತಿನ ಹಣ ಖಾತೆಗೆ ಜಮಾ ಆಗಲಿದೆ ನೀಡಲಾಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಶೀಘ್ರದಲ್ಲೇ ನಿಮ್ಮ ಹಣ ಖಾತೆಗೆ ಜಮಾ! ಈವರೆಗೆ 11.74 ಕೋಟಿ ರೈತರನ್ನು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜ( PM Kisan Samman Scheme )ನೆಗೆ ನೊಂದಾಯಿಸಿಕೊಂಡಿದ್ದಾರೆ. ಅವರು ನಿಯಮಿತವಾಗಿ ಈ ಮೊತ್ತವನ್ನು ಪಡೆಯಲ್ಲಿದ್ದಾರೆ. ನೀವೂ ಸಹ ಏಪ್ರಿಲ್-ಜುಲೈಗೆ 2000 ರೂಪಾಯಿಗಾಗಿ ಕಾಯುತ್ತಿದ್ದರೆ, ಈ ತಿಂಗಳ ಕೊನೆಯಲ್ಲಿ ಅಥವಾ ಮೇ 2 ರ ನಂತರ ಯಾವುದೇ ಸಮಯದಲ್ಲಿ ರೈತರ ಖಾತೆಗೆ ಹಣ ಬರಬಹುದು. ನಿಮ್ಮ ಹಳ್ಳಿಯಲ್ಲಿ ಯಾರಿಗೆ ಹಣ ಬರುತ್ತದೆ, ನೀವು ಅದನ್ನು ಬಹಳ ಸುಲಭವಾಗಿ ನೋಡಬಹುದು. ಅದಕ್ಕಾಗಿ ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ. ಈ ರೀತಿ ಪರಿಶೀಲಿಸಿ: ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು. ಇಲ್ಲಿ ನೀವು ಫಾರ್ಮರ್ಸ್ ಕಾರ್ನರ್( Farmers Corner ) ಆಯ್ಕೆಯನ್ನು ನೋಡುತ್ತೀರಿ. ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ, ಫಲಾನುಭವ...

ಪ್ರಧಾನಮಂತ್ರಿ ಮುದ್ರಾ ಯೋಜನೆ ಅಂದ್ರೇನು? ಲಾಭವೇನು? ಇಲ್ಲಿದೆ ಸಂಪೂರ್ಣ ವಿವರ

Image
ಮುದ್ರಾ ಯೋಜನೆ ಬಗ್ಗೆ ನಿಮಗೆಸ್ಟು ಗೊತ್ತು..? ಮುದ್ರಾ ಯೋಜನೆ ಎಂದರೇನು? ಸಣ್ಣ ಪುಟ್ಟ ವ್ಯವಹಾರವನ್ನು ಪ್ರಾರಂಭಿಸುವ ಬಯಕೆ ಇರುವವರಿಗೆ ಸರಕಾರದವತಿಯಿಂದ ಕಡಿಮೆ ಬಡ್ಡಿದರದಲ್ಲಿ 10 ಲಕ್ಷದ ವರೆಗೆ ಸಾಲವನ್ನು ನೀಡುವ ಒಂದು ಕೇಂದ್ರ ಸರಕಾರದ ಯೋಜನೆಯನ್ನು ಮುದ್ರಾ ( MUDRA-Micro Units Development and Refinance Agency)   ಯೋಜನೆ ಎನ್ನುತ್ತಾರೆ. ನವದೆಹಲಿ(ಏ.07): ವಂಚಿತರು ಮತ್ತು ಈವರೆಗೆ ಸಾಮಾಜಿಕ-ಆರ್ಥಿಕವಾಗಿ ನಿರ್ಲಕ್ಷಿತ ವರ್ಗಗಳಿಗೆ ಹಣಕಾಸಿನ ನೆರವು ಮತ್ತು ಬೆಂಬಲವನ್ನು ಒದಗಿಸಲು ಹಣಕಾಸು ಸಚಿವಾಲಯ ಬದ್ಧವಾಗಿದೆ. ಉದಯೋನ್ಮುಖ ಉದ್ಯಮಿಗಳಿಂದ ಹಿಡಿದು ಕಷ್ಟಪಟ್ಟು ದುಡಿಯುವ ರೈತರವರೆಗೆ ಎಲ್ಲ ಬಾಧ್ಯಸ್ಥರ ಆರ್ಥಿಕ ಅಗತ್ಯಗಳನ್ನೂ ವಿವಿಧ ಉಪಕ್ರಮಗಳ ಮೂಲಕ ಪೂರೈಸಲಾಗುತ್ತಿದೆ. ಈ ನಿಟ್ಟಿನಲ್ಲಿ ಒಂದು ಪ್ರಮುಖ ಉಪಕ್ರಮವೆಂದರೆ ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ), ಸ್ವ-ಮೌಲ್ಯ ಮತ್ತು ಸ್ವಾತಂತ್ರ್ಯದ ಭಾವನೆಯೊಂದಿಗೆ ಇದು ಲಕ್ಷಾಂತರ ಜನರ ಕನಸು ಮತ್ತು ಆಕಾಂಕ್ಷೆಗಳಿಗೆ ಗರಿ ಮೂಡಿಸಿದೆ. ಸಾಂಸ್ಥಿಕೇತರ, ಕೃಷಿಯೇತರ ಸಣ್ಣ/ಸೂಕ್ಷ್ಮ ಉದ್ದಿಮೆಗಳಿಗೆ 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ಒದಗಿಸಲು ಪಿಎಂಎಂವೈಗೆ ಮಾನ್ಯ ಪ್ರಧಾನಮಂತ್ರಿಯವರು 2015ರ ಏಪ್ರಿಲ್ 8ರಂದು ಚಾಲನೆ ನೀಡಿದ್ದರು. ನಾವು ಪಿಎಂಎಂವೈನ ಆರನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ, ಈ ಯೋಜನೆ ಮತ್ತು ಅದು ಈವರೆಗೆ ಮಾಡಿರುವ ಸಾಧನಯತ್ತ ಒಂದು ...

ಪಿಎಂ ಕಿಸಾನ್ ಯೋಜನೆ 8ನೇ ಕಂತಿನ ಹಣ ಬಿಡುಗಡೆ

Image
 

PM- ಕಿಸಾನ್ ಸಮ್ಮಾನ್ ಯೋಜನೆ

Image
  ನವದೆಹಲಿ : ದೇಶದ 11 ಕೋಟಿಗೂ ಹೆಚ್ಚು ರೈತರು ಮೋದಿ ಸರ್ಕಾರದ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ, ಆದರೆ ಕೆಲವೇ ಫಲಾನುಭವಿಗಳಿಗೆ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿಫಲಾನುಭವಿಗಳಾಗಿದ್ದರೆ, ಅವರು ತಮ್ಮ ಜೇಬಿನಿಂದ ಒಂದು ರೂಪಾಯಿಯನ್ನೂ ನೀಡದೆ ಸರ್ಕಾರದಿಂದ ತಿಂಗಳಿಗೆ ೩೦೦೦ ರೂ.ಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಇದಕ್ಕಾಗಿ ಯಾವುದೇ ದಾಖಲೆಯನ್ನು ಠೇವಣಿ ಇಡಬೇಕಾಗಿಲ್ಲ. ಹೌದು, ನಾವು ಪಿಎಂ ಕಿಸಾನ್ ಮಾನ್ ಧನ್ ಯೋಜನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಮೋದಿ ಸರ್ಕಾರದ ಯೋಜನೆಯು ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ಬಳಸಿಕೊಳ್ಳುತ್ತಿರುವ ಎಲ್ಲಾ ರೈತರಿಗೆ ಪ್ರಯೋಜನಕಾರಿಯಾಗಬಹುದು. ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪಿಎಂ ಕಿಸಾನ್ ಮನ್ ಧನ್ ಯೋಜನೆಯ ಪ್ರಯೋಜನಗಳನ್ನು ಪಿಎಂ ಕಿಸಾನ್ ಫಲಾನುಭವಿಗಳಿಗೆ ಒದಗಿಸುತ್ತಿದೆ. ಯೋಜನೆಗೆ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ಜೇಬಿನಿಂದ ಖರ್ಚು ಮಾಡದೆ 36,000 ಪದೆಯುವುದು ಹೇಗೆ? ಪಿಎಂ ಕಿಸಾನ್ ಮಾನ್ ಧನ್ ಯೋಜನೆಯಡಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲು ಯೋಜಿಸಲಾಗಿದೆ, ಇದು 60 ವರ್ಷಗಳ ನಂತರ ತಿಂಗಳಿಗೆ ರೂ.3000 ಅಥವಾ ವಾರ್ಷಿಕ 36,000 ಪಿಂಚಣಿಯನ್ನು ಒದಗಿಸುತ್ತದೆ. ಒಬ್ಬ ರೈತ ಪಿಎಂ-ಕಿಸಾನ್ ಸಮ್ಮಾನ್ ನಿಧಿಯನ್ನು ಪಡೆಯುತ್ತಿದ್ದರೆ, ಅವರು ಪಿಎಂ ಕಿಸಾನ್ ಮನ್ ಧನ್ ಯೋಜನೆಗಾ...

ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ 8 ನೇ ಕಂತು ಪ್ರಾರಂಭವಾಗಿದೆ:

Image
  ಯೋಜನೆಯ 8 ನೇ ಕಂತು ರೈತರ ಖಾತೆಗೆ ಬರಲು ಪ್ರಾರಂಭಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ಆರು ಸಾವಿರ ರೂ.ಗಳನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.  ಇದೀಗ ಸರ್ಕಾರದಿಂದ ಈ ವರ್ಷದ ಮೊದಲ ಕಂತು/ ಪಿಎಂ ಕಿಸಾನ್ ಯೋಜನೆಯ 8 ನೇ ಕಂತು ಬಿಡುಗಡೆಯಾಗಿದ್ದು ಈ ಬಾರಿ ಒಟ್ಟು 11.66 ಕೋಟಿ ರೈತರ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ 8 ನೇ ಕಂತು ಪ್ರಾರಂಭವಾಗಿದೆ: ಪಿಎಂ ಕಿಸಾನ್ ಸಮ್ಮಾನ್ ನಿಧಿ ( PM Kisan Samman Nidhi ) ಯೋಜನೆಯಡಿ ಪ್ರತಿ ವರ್ಷ ರೈತರ ಖಾತೆಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ. ವರ್ಗಾಯಿಸಲಾಗುತ್ತದೆ. ಪ್ರತಿ ವರ್ಷ ಸರ್ಕಾರ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ನೀಡುತ್ತದೆ, ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ.  ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ, ನೀವು ಈ ವರ್ಷದ ಮೊದಲ ಕಂತು 2000 ರೂಪಾಯಿಗಳು ನಿಮ್ಮ ಖಾತೆಯನ್ನು ತಲುಪಿದೆಯೇ ಎಂದು ಈಗಲೇ ಪರಿಶೀಲಿಸಬಹುದು. ವಾಸ್ತವವಾಗಿ ಸರ್ಕಾರ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮ್ಮ ಹಣ ಶೀಘ್ರವೇ ನಿಮ್ಮ ಖಾತೆ ಸೇರಲಿದೆ ಎಂದರ್ಥ. ಆದ್ದರಿಂದ, ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯ...

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; NPS ಬದಲು ಸಿಗಲಿದೆ ಹಳೆಯ Pension ಸ್ಕೀಮ್ ಲಾಭ

Image
  ನವದೆಹಲಿ :   NPS and Old Pension System: ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಪಟ್ಟಂತೆ ಸರ್ಕಾರ ಪ್ರಕಟಣೆ ಹೊರಡಿಸಿದೆ.  ಸರ್ಕಾರಿ ನೌಕರರು  31 ಮೇ 2021 ರವರೆಗೆ ಹಳೆಯ ಪಿಂಚಣಿ ಯೋಜನೆಯ (OPS) ಲಾಭ ಪಡೆಯಬಹುದು. ಡಿಪಾರ್ಟ್ಮೆಂಟ್ ಆಫ್ ಪೆನ್ಷನ್ ಅಂಡ್ ಪೆನ್ಶನರ್ಸ್ ವೆಲ್ಫೇರ್ (DoPPW) ಅಧಿಸೂಚನೆಯ ಮೂಲಕ ಈ ಮಾಹಿತಿಯನ್ನು ನೀಡಿದೆ. ಹಳೆಯ ಪಿಂಚಣಿ ಯೋಜನೆಗೆ ಮೇ 5 ರೊಳಗೆ ಅರ್ಜಿ ಸಲ್ಲಿಸಬಹುದು :  ಇದರ ಲಾಭ ಪಡೆಯಲು ಬಯಸುವ ನೌಕರರು ಮೇ 5 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸದ ನೌಕರರು ರಾಷ್ಟ್ರೀಯ ಪಿಂಚಣಿ ( NPS ) ವ್ಯವಸ್ಥೆಯಿಂದ ಲಾಭ ಪಡೆಯುತ್ತಲೇ ಇರುತ್ತಾರೆ. 1 ಜನವರಿ 2004 ರಿಂದ 28 ಅಕ್ಟೋಬರ್ 2009 ರ ನಡುವೆ ನೇಮಕಗೊಂಡ ನೌಕರರಿಗೆ ಸಿಸಿಎಸ್ ಪಿಂಚಣಿ (CCS Pension) ಅಡಿಯಲ್ಲಿ ಮಾತ್ರ ಪಿಂಚಣಿ ಸೌಲಭ್ಯ ಸಿಗುತ್ತದೆ.

ಎಲ್‌ಐಸಿ ಪಾಲಿಸಿದಾರರಿಗೆ ಸಂತಸದ ಸುದ್ದಿ..!

Image
  ಬೆಂಗಳೂರು(ಮಾ.20):   ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅವಧಿ ಮುಗಿದ ಪಾಲಿಸಿದಾರರು ದೇಶದ ಯಾವುದೇ ಶಾಖೆಗಳಲ್ಲಿ ಪಾಲಿಸಿ ದಾಖಲೆಗಳನ್ನು ಸಲ್ಲಿಸಿ ಹಣ ಪಡೆಯುವ ನೂತನ ಉಪಕ್ರಮವನ್ನು ಮಾ.31ರಿಂದ ಪ್ರಾಯೋಗಿಕವಾಗಿ ಆರಂಭಿಸಲಿದೆ. ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಪಾಲಿಸಿದಾರರ ಹಿತದೃಷ್ಟಿಯಿಂದ ನಿಗಮ ಉಪ ಕ್ರಮ ರೂಪಿಸಿದೆ. ಮಾ.31ರ ನಂತರ ಹತ್ತಿರದ ಯಾವುದೇ ಎಲ್‌ಐಸಿ ಶಾಖೆಯಲ್ಲಿ ಪಾಲಿಸಿದಾರರು ದಾಖಲೆ ಸಲ್ಲಿಸಿದರೆ ಪಾಲಿಸಿ ಮಾಡಿಸಿದ್ದ ಮೂಲ ಶಾಖೆæಯಿಂದ ಆನ್‌ಲೈನ್‌ ಮೂಲಕ ಅವರ ಬ್ಯಾಂಕ್‌ ಖಾತೆಗೆ ಠೇವಣಿಯ ಹಣ ಜಮೆಯಾಗಲಿದೆ. LICಯ ನೂತನ ವಿಮಾ ಪಾಲಿಸಿ ‘ಬಚತ್‌ ಪ್ಲಸ್‌’! ಈ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ದೇಶದ 113 ವಿಭಾಗೀಯ ಕಚೇರಿ, 2048 ಶಾಖೆಗಳು, 1526 ಸ್ಯಾಟ್‌ಲೈಟ್‌ ಕಚೇರಿ ಹಾಗೂ 74 ಗ್ರಾಹಕ ವಲಯ ಕಚೇರಿಗಳಿಗೆ ಎಲ್‌ಐಸಿ ನಿರ್ದೇಶನ ನೀಡಿದೆ. ಜತೆಗೆ ಎಲ್ಲ ಶಾಖೆಯ ಅಧಿಕಾರಿಗಳಿಗೆ ಪಾಲಿಸಿದಾರರ ದಾಖಲೆಗಳ ಪರಿಶೀಲನೆಗೆ ವಿಶೇಷ ಅಧಿಕಾರ ನೀಡಲಾಗಿದೆ. ಗ್ರಾಹಕರನ್ನು ಕೇಂದ್ರವಾಗಿಟ್ಟುಕೊಂಡು ಉಪಕ್ರಮ ರೂಪಿಸಿರುವ ಎಲ್‌ಐಸಿ, ದೇಶಾದ್ಯಂತ 29 ಕೋಟಿಗೂ ಅಧಿಕ ಪಾಲಿಸಿದಾರರನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು ವಸತಿ ಯೋಜನೆ; ಅರ್ಜಿ ಸಲ್ಲಿಕೆಗೆ ಅರ್ಹತೆ ಏನು? ಆಸಕ್ತರು 30/4/2021ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

Image
  ಬೆಂಗಳೂರು ವಸತಿ ಯೋಜನೆ; ಅರ್ಜಿ ಸಲ್ಲಿಕೆಗೆ ಅರ್ಹತೆ ಏನು? ಬೆಂಗಳೂರು, ಏಪ್ರಿಲ್ 01;  ಬೆಂಗಳೂರು  ನಗರದಲ್ಲಿ ಮನೆ ಮಾಡುವುದು ಹಲವಾರು ಜನರ ಕನಸು. ಇದಕ್ಕಾಗಿ 'ಬೆಂಗಳೂರು ವಸತಿ ಯೋಜನೆ' ರೂಪಿಸಲಾಗಿದೆ. ಆಸಕ್ತರು 30/4/2021 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ವಸತಿ ಸಚಿವ ವಿ. ಸೋಮಣ್ಣ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅರ್ಹರು ಏಪ್ರಿಲ್ 30ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದ್ದಾರೆ. ಪ್ರತಿ ಘಟಕ (1ಬಿಎಚ್‌ಕೆ) ಮೊತ್ತ 10.6 ಲಕ್ಷ ರೂ.ಗಳು. 2.7 ಲಕ್ಷ ಸಹಾಯಧನ ಹೊರತುಪಡಿಸಿ ಬಾಕಿ ಮೊತ್ತ 7.9 ಲಕ್ಷ ರೂ.ಗಳು. ಮನೆ ಹಂಚಿಕೆಯಾದ ನಂತರ ರಾಜೀವ್ ಗಾಂಧಿ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಶೇ 25ರಷ್ಟು ಪಾವತಿ ಮಾಡಬೇಕು. ಉಳಿದ ಹಣಕ್ಕೆ ಸಾಲ ಪಡೆಯಲು ಇಚ್ಚಿಸಿದಲ್ಲಿ ನಿಗಮದ ವತಿಯಿಂದ 15 ವರ್ಷಗಳಿಗೆ ಸಾಲ ನೀಡಲಾಗುತ್ತದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು  ವೆಬ್ ಸೈಟ್‌ ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಅರ್ಹತೆ ಅರ್ಜಿಗಳನ್ನು ಸಲ್ಲಿಸುವವರ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು. ಕನಿಷ್ಠ 5 ವರ್ಷ ಬೆಂಗಳೂರು ನಗರ ಅಥವ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು ಯಾವ-ಯಾವ ದಾಖಲೆಗಳು ಅರ್ಜಿಗಳನ್ನು ಸಲ್ಲಿಸಲು ಜಾತಿ ಪ್ರಮಾಣ ಪತ್ರ, ಆದ...

ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮಗು ಮಿಲಿಯನೇರ್ ಆಗಬಹುದು!

Image
ಈ ಮಾಹಿತಿಯನ್ನು ಪಡೆಯಲು "ಪಾಲಿಸಿ" ಎಂದು ನಮಗೆ ವಾಟ್ಸಪ್ ಮಾಡಿ 9916444424  

ಮನೆಯಲ್ಲಿ ಹೆಣ್ಣು ಮಕ್ಕಳು ಇದ್ರೆ ಸುಕನ್ಯಾ ಸಮೃದ್ಧಿ ಯೋಜನೆ ತಿಳಿಯಿರಿ

Image
 ಮನೆಯಲ್ಲಿ ಹೆಣ್ಣು ಮಕ್ಕಳು ಇದ್ರೆ ಸುಕನ್ಯಾ ಸಮೃದ್ಧಿ ಯೋಜನೆ ತಿಳಿಯಿರಿ ಸರ್ಕಾರಗಳು ರಚನೆಯಾಗಿರುವುದೇ ಜನರನ್ನು ಮೂಲಭೂತ ಸೌಕರ್ಯಗಳ ಕೊರತೆಗಳನ್ನು ನೀಗಿಸುವುದು ಮತ್ತು ರಾಜ್ಯದ ಆರ್ಥಿಕತೆಯನ್ನು  ಅಭಿವೃದ್ಧಿ ಮಾಡುವುದು ಆಗಿದೆ. ಹಾಗಾಗಿ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಾರೆ. ಅದರಲ್ಲೂ ಬಿ.ಪಿ.ಎಲ್. ಕಾರ್ಡ್ ಇದ್ದವರಿಗೆ ಅತಿ ಹೆಚ್ಚು ಸೌಲಭ್ಯಗಳು ದೊರಕುತ್ತವೆ. ಆದ್ದರಿಂದ ನಾವು ಇಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಇದು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಮದುವೆಗೆ ಹಣ ಉಳಿತಾಯ ಮಾಡುವ ಉದ್ದೇಶ ಆಗುತ್ತದೆ. 10ವರ್ಷದ ಒಳಗಿನ ಹೆಣ್ಣು ಮಕ್ಕಳು ಮಾತ್ರ ಈ ಅಕೌಂಟ್ ನ್ನು ಒಪನ್ ಮಾಡಬಹುದು. ಹಾಗೆಯೇ ಎರಡು ಅಕೌಂಟ್ ನ್ನು ಮಾತ್ರ ಓಪನ್ ಮಾಡಬಹುದು. ಇನ್ನು ಅವಳಿ ಜವಳಿ ಇದ್ದರೆ ಮೂರು ಅಕೌಂಟ್ ನ್ನು ಒಪನ್ ಮಾಡಬಹುದು. ಕಡಿಮೆ ಎಂದರೆ 250ರೂಪಾಯಿಯನ್ನು ತುಂಬಬಹುದು. ಮೊದಲು 1000ರೂಪಾಯಿ ಇತ್ತು. ಹಾಗೆಯೇ ಹೆಚ್ಚು ಎಂದರೆ 150000ರೂಪಾಯಿಯವರೆಗೆ ತುಂಬಬಹುದು. ಇದಕ್ಕೆ ವರ್ಷದ ಬಡ್ಡಿ ಶೇಕಡಾ 8.4 ಇದೆ. ಮೊದಲು ಶೇಕಡಾ 5.5 ಇತ್ತು. ತುಂಬುವುದು ಸಾಧ್ಯವಾಗದೇ ಹೋದಾಗ 50ರೂಪಾಯಿ ಪೆನಾಲ್ಟಿ ಕಟ್ಟಿ ಮುಂದುವರೆಸಿಕೊಂಡು ಹೋಗಬಹುದು....

ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ

Image
 ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೂ ಮನೆ ಎನ್ನುವುದು ಒಂದು ವಾಸಸ್ಥಳದ ರೂಪವಾಗಿ ಬೇಕೇ ಬೇಕು. ಅನುಕೂಲ ಇರುವವರು ತಮಗೆ ಬೇಕಾದಂತೆ ಹೊಸ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಹಾಗೆಯೇ ಅನುಕೂಲ ಇಲ್ಲದವರು ತಮ್ಮ ಕೈಯಲ್ಲಿ ಆದ ಮಟ್ಟಿಗೆ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಹಾಗೆಯೇ ಸಾಲಗಳನ್ನು ಮಾಡಿ ಹಲವಾರು ವರ್ಷಗಳ ನಂತರ ತೀರಿಸುತ್ತಾರೆ. ಆದ್ದರಿಂದ ಇಂತಹವರಿಗೆ ಸೌಲಭ್ಯ ಒದಗಿಸಲು ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಬೆಂಗಳೂರು ನಿವಾಸಿಗಳಿಗೆ ರಾಜ್ಯ ಸರ್ಕಾರ ಒಂದು ಸಿಹಿಸುದ್ದಿಯನ್ನು ನೀಡಿದೆ. ರಾಜ್ಯಸರ್ಕಾರ ಬೆಂಗಳೂರು ವಸತಿಯೋಜನೆಯನ್ನು ಆರಂಭಿಸಿದೆ. ಬೆಂಗಳೂರು ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಮಾಡಬೇಕು ಎಂದು ಕನಸು ಇರುತ್ತದೆ. ಹಾಗಾಗಿ ಇದಕ್ಕೆ ಒಂದು ಸದಾವಕಾಶವನ್ನು ಬೆಂಗಳೂರಿನ ಜನರಿಗೆ ನೀಡಲಾಗುತ್ತಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಗೆ ಸ್ವಂತ ಮನೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಾಗೆಯೇ ಅರ್ಜಿ ಸಲ್ಲಿಸುವವರ ಆದಾಯ 3ಲಕ್ಷ ಹಣವನ್ನು ಮೀರಿರಬಾರದು. 5ವರ್ಷಗಳ ಕಾಲ ಬೆಂಗಳೂರು ನಗರ ಅಥವಾ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸ ಮಾಡಿರಬೇಕಾಗುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಎಲ್ಲಿಯೂ...

Apply for Passport Services

Image
Apply for Passport Services All Indian citizens who depart or intend to depart from India are required to have a valid passport or travel document. Under the Passports Act 1967, the Government of India may issue different types of passports and travel documents. Applicants in the United States of America are required to apply for their passports through SE Indian Consular Application centres. Your Indian passport establishes your identity in a foreign country. Hence it is important to have it re-issued before the date of expiry. The passport can be submitted for re-issue up to one year before the date of expiry. Your Indian passport is a valuable document. It should always be either in your custody or in the custody of a person duly authorized by you. If lost or destroyed, the fact and circumstances should be immediately reported to the nearest Mission and the local police. We suggest that you keep a photocopy of your Indian passport in a safe place, separate from the passport. The pho...

SUBCRIBE OUR YOUTUBE

SUBCRIBE OUR YOUTUBE
ತಪ್ಪದೆ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Popular Posts

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್-ಧನ್

ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ

ರೇಷನ್ ಕಾರ್ಡ್ ಬಗ್ಗೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಮತ್ತು ಮಾಹಿತಿ ಪಡೆಯಿರಿ

GOOGLE MAP